Monday, December 4, 2006

ಇತಿ-ಹಾಸ

ಇವತ್ತು ಎಸ್.ಎಲ್.ಭೈರಪ್ಪ ಅವರ ಲೇಖನ ಓದಿ ನಿಜವಾಗಿಯೂ ವಿಚಿತ್ರ ಅನ್ನಿಸಿತು.ನಮಗೆ ನಮ್ಮ ಇತಿಹಾಸವೇ ಗೊತ್ತಿಲ್ಲವೋ ಅಥವ ಗೊತ್ತಿದ್ದುದ್ದನ್ನು ಮುಂದಿನ ಪೀಳಿಗೆಗೆ ಹೇಳಲು ಇಷ್ಟ ಇಲ್ಲವೋ ಎಂದು.ಯಾಕೋ ಏನೂ ಹೊಳೆಯುತ್ತಿಲ್ಲ ಮತ್ತೆ ಬರೆಯುವೆ.

Saturday, November 18, 2006

ಏನು ಬರೆಯಬೇಕು?

ಬ್ಲಾಗ್ ಶುರು ಅಂತು ಮಾಡಿಕೊಂಡೆ ಆದರೆ ಏನು ಬರೆಯಬೇಕೆನ್ನುವದು ಇನ್ನು ಸರಿಯಾಗಿ ಗೊತ್ತಗುತ್ತಿಲ್ಲ.ಅಂತರ್ಜಾಲದಲ್ಲಿ ನೋಡಿದರೆ ಜನ ಏನೇನೋ ಬರೆಯುವದನ್ನು ನೋಡಿದ್ದೇನೆ.ರಾಮಯಣ ಮಹಾಭಾರತಗಳ ಬಗ್ಗೆ ಬರೆಯಬೆಕೆಂದರೆ ಅಷ್ಟು ತಿಳಿದುಕೊಂಡವನಲ್ಲ.ಮೇಲಾಗಿ ಬರೆಯುವಷ್ಟು ಇನ್ನೂ ತಿಳಿದುಕೊಂಡಿಲ್ಲ.ದಿನನಿತ್ಯದ ಜೀವನದ ಬಗ್ಗೆ ಬರೆಯೋಣ ಎಂದರೆ ಬಹಳಷ್ಟು ಹೊತ್ತು,ಹೋತ್ತು ಕಳೆಯುವದರಲ್ಲೇ ಹೊತ್ತು ಕಳೇಯುತ್ತೇನೆ! ಯಾರದರೂ ಈ ಪೋಸ್ಟ್ ಓದಿದರೆ ನನ್ನನ್ನು ಬಯ್ದುಕೊಲ್ಲುತ್ತಾರೆ.ತಲೆಯಲ್ಲಿ ಏನೂ ಇಲ್ಲದೇ ಬರೆಯುವದು ಹೇಗೆ ಎಂದು ನನ್ನ ಈ ಲೇಖನ ಓದಿ ತಿಳಿದುಕೊಳ್ಳಬಹುದು.
ಸರಿ ನಾನು ಮಲಗುತ್ತೇನೆ
ಶುಭ ರಾತ್ರಿ

Tuesday, November 14, 2006

ಕನ್ನಡ ದಲ್ಲಿ ಮೋದಲ ಬ್ಲೊಗ್

ಇವತ್ತು ಬೆಳಿಗ್ಗೆ ಎದ್ದಾಗ ಯಾಕೊ ಸ್ವಲ್ಪ ಸುಸ್ತು ಅನ್ನಿಸಿತು.ಅದಕ್ಕೆ ಆಫೀಸಿಗೆ ಹೋಗಲಿಲ್ಲಾ.ಸರಿ ಸಮಯ ಕಳೆಯಲು
ಇಂಟರ್ನೆಟ್ ಹಚ್ಚಿದೆ.ಇಂಟರ್ನೆಟ್ ನಲ್ಲಿ ಕನ್ನಡ ಬ್ಲೋಗ್ ಬರೆಯುವ ಹಾಗಿದ್ದರೆ ಚೆನ್ನಗಿತ್ತು ಅನಿಸ್ತು.
ಸರಿ ಅದರ ಬಗ್ಗೆನೆ ಒಂದು ಬ್ಲೊಗ್ ಬರೆದರೆ ಆಯ್ತು ಅನ್ಕೊಂಡೆ.ಕನ್ನಡದ ಕೊರತೆ ಎಷ್ಟು ಇದೆ ಎನ್ನುವದರ ಬಗ್ಗೆ
ಬರೆಯೋಣ ಅನ್ಕೊಂಡೆ.ಬರೆಯುವ ಮೊದಲು ಸ್ವಲ್ಪ ಸಂಶೋಧನೆ ಮಾಡುವದು ಒಳ್ಳೆಯದು ಅನ್ನಿಸ್ತು.
ಆವಾಗ ಸಿಕ್ಕಿದ್ದೆ sampada.com.ತುಂಬಾ ಚೆನ್ನಾಗಿ ವಿಷಯವನ್ನು ಹೇಳಿದ್ದಾರೆ ಅಲ್ಲಿ.
ಕನ್ನಡವನ್ನು ಬರೆಯಲಿಕ್ಕೆ ಮತ್ತು ಓದಲಿಕ್ಕಾಗಿ operating system ಗೆ ಎನೇನು ಮಾರ್ಪಾಟು
ಮಾಡಬೇಕು ಎಲ್ಲವನ್ನು ಚೆನ್ನಾಗಿ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯದ ಬಗ್ಗೆ ನಾವು ಎಷ್ಟು ಕಾಳಜಿ ವಹಿಸಬೇಕು ಅಷ್ಟು ನಾವು ವಹಿಸುತ್ತಿಲ್ಲ ಅನ್ನುವದು ನಿಜ,ಆದರೆ
ಸಾಹಿತ್ಯವನ್ನು ಬೆಳೆಸಲು ಬೇಕಾಗುವ ಸಲಕರಣೆಯಂತು ಸಿಕ್ಕಂತಾಯಿತು.ಇನ್ನು ನಾವು ಮಾಡಬೆಕಾಗಿರುವದು
ಇಷ್ಟೆ,ಎನಾದರೂ ಬರೆಯಲಿ ಕನ್ನಡದಲ್ಲಿ ಬರೆಯೋಣ.ಅಂತರ್ಜಾಲದಲ್ಲಿ ಕನ್ನಡ ಸಾಹಿತ್ಯ ಹೆಚ್ಚಾಗಿ ದೊರೆಯುವಂತಾಗಬೇಕು.
ಒಂದೇ ಒಂದು ತೊಂದರೆ ಎನು ಅಂದರೆ ನಾವು ಬರೆಯುವ ವಿಷಯ ಚೆನ್ನಾಗಿ ಇದ್ದರೂ ಅದರಿಂದ ಹಣ ಸಂಪಾದಿಸುವದು
ಅಷ್ಟು ಸುಲಭ ಇಲ್ಲ.ಆಂಗ್ಲ ಸಾಹಿತ್ಯದಿಂದ ಹಣ ಸಂಪಾದಿಸುವದು ಸುಲಭ.google AdSense
ಒಂದು ಒಳ್ಲೆಯ ಕಾರ್ಯಕ್ರಮ.ನಾವು ಬರೆಯುವ ವಿಷಯಕ್ಕೆ ಸಂಬಂಧಿಸಿದ ಜಾಹಿರಾತುಗಳನ್ನು ಅವರು ನಮ್ಮ
ಲೇಖನದ ಪಕ್ಕಕ್ಕೆ ಪ್ರಕಟಿಸುತ್ತಾರೆ.ಕನ್ನಡದಲ್ಲಿ ಬರೆದಾಗ ನಾವು ಬರೆದ ವಿಷಯ ಗೂಗ್ಲ್ ಗೆ ತಿಳಿಯದೇ ಇರಬಹುದು.
ಆವಾಗ ಅವರು ಪ್ರಕಟಿಸುವ ಜಾಹಿರಾತು ನಾವು ಬರೆದ ವಿಷಯಕ್ಕೆ ಹೊಂದದೇ ಇರಬಹುದು.ಅದಕ್ಕೆ ಬೆರೆ ದಾರಿ ಹುಡುಕಿದರಾಯ್ತು.
ಮೋದಲ ಕೆಲಸ,ಅಂತರ್ಜಾಲವನ್ನು ಕನ್ನಡ ಸಾಹಿತ್ಯದಿಂದ ತುಂಬುವದು.
ಬನ್ನಿ ಈ ರಾಜ್ಯೋತ್ಸವದ ತಿಂಗಳು ಈ ಸಂಕಲ್ಪವನ್ನು ಮಾಡೋಣ.ಕರ್ನಾಟಕದ ಹಿರಿಮೆಯನ್ನು ತಿಳಿಯೊಣ ಹಾಗೂ
ತಿಳಿಸೋಣ.
ಸಿರಿಗನ್ನಡಂ ಗೆಲ್ಗೆ,ಸಿರಿಗನ್ನಡಂ ಬಾಳ್ಗೆ
ಜೈ ಕನ್ನಡಾಂಬೆ,ಜೈ ಕರ್ನಾಟಕ